ಕಳೆದ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ 40+ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಮಾತಾ ಅಮೃತಾನಂದಮಯಿ ಮಠ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದೆ.
ದೇಶ ಹೆಮ್ಮೆಯ ಯೋಧರನ್ನು ಕಳೆದುಕೊಂಡಿದೆ. ಯೋಧರ ಕುಟುಂಬಕ್ಕೆ ಸಹಾಯ ಮಾಡುವುದು ನಮ್ಮ ಧರ್ಮ, ನಮ್ಮನ್ನು ಸುರಕ್ಷಿತವಾಗಿಡಲು ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಸ್ಥರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ಶ್ರೀ ಮಾತಾ ಅಮೃತಾನಂದಯಿ ಹೇಳಿದ್ದಾರೆ.
2019ರ ಭಾರತ ಯಾತ್ರೆ ಪ್ರಯುಕ್ತ ಮಾತಾ ಅಮೃತಾನಂದಮಯಿ ಮೈಸೂರಿಗೆ ತೆರಳುತ್ತಿದ್ದು, ಇದೇ ಸಂದರ್ಭದಲ್ಲಿ ಹುತಾತ್ಮ ಯೋಧರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

ಇಂದು ಭಾರತ ಹಲವು ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಅಭಿವೃದ್ಧಿಯನ್ನು ಕಂಡು ಭರವಸೆ ಮೂಡುತ್ತಿದೆ. ಆರ್ಥಿಕ ಬೆಳವಣಿಗೆಯಲ್ಲಿಯೂ ಹಾಗು ವಿಜ್ಞಾನದಲ್ಲಿಯ ಪ್ರಗತಿಯಲ್ಲಿಯೂ ನಾವು ಬಹಳ ಮುಂದುವರಿಯುತ್ತಿದ್ದೇವೆ. ಮಂಗಳಯಾನ ಉಪಗ್ರಹದ ವಿಜಯವು ಇಡೀ ಲೋಕದ ಮನ್ನಣೆಯನ್ನು ನಮಗೆ ಗಳಿಸಿಕೊಟ್ಟಿದೆ. ಹಾಗಿದ್ದರೂ ಸಹ, ಭಾರತದಲ್ಲಿನ ಪ್ರತಿಯೊಂದು ಬಡವರ ಜೀವನದಲ್ಲಿಯೂಕೂಡ ಮಂಗಳವು ಸಂಭವಿಸುವಾಗ ಮಾತ್ರವೇ  ನಮ್ಮಯ ಅಭಿವೃದ್ಧಿಗಳೆಲ್ಲವೂ ನಿಜವಾದ ಅರ್ಥವನ್ನು ಮತ್ತು ಪೂರ್ಣತೆಯನ್ನು ಹೊಂದುವುದು.ಕಳೆದ ಎರಡು ವರ್ಷಗಳಿಂದ ಆಶ್ರಮವು ಭಾರತದಾದ್ಯಂತ ನೂರಾರು ಗ್ರಾಮಗಳನ್ನು ದತ್ತುಪಡೆದು ಅಲ್ಲಿ ಸೇವಾಕಾರ್ಯಗಳನ್ನು ನಡೆಸುತ್ತಿದೆ. ಹಲವು ಗ್ರಾಮಗಳ ಸ್ಥಿತಿಯನ್ನು ಕಾಣುವಾಗ ದುಃಖವುಂಟಾಗುತ್ತದೆ. ನೂರು ವರ್ಷಗಳ ಹಿಂದಿನ ಅದೇ ಸ್ಥಿತಿ ಇಗಲೂ ಈ ಹಳ್ಳಿಗಳಲ್ಲಿ ಮುಂದುವರೆಯುತ್ತಿದೆ. ಗ್ರಾಮಗಳನ್ನು ಅವಗಣಿಸಿ ಸಾಧಿಸುವ ಅಭಿವೃದ್ಧಿಗಳು, ಶರೀರದ ಕೈಕಾಲುಗಳು ಬೆಳೆದು ಇತರ ದೇಹದಭಾಗಗಳು ಬೆಳೆಯದೇ ಹೋದಹಾಗೆ ಆಗುವುದು.

ಭಾರತದ ಆತ್ಮ ಗ್ರಾಮಗಳು

ಭಾರತದ ಆತ್ಮ ಗ್ರಾಮಗಳು ಎಂಬುದನ್ನು ನಾವು ಮರೆಯಬಾರದು. ನಾವು ಗ್ರಾಮಗಳ ಸಾಂಸ್ಕಾರಿಕ ಮೌಲ್ಯಗಳನ್ನು ಕಾಪಾಡಬೇಕು, ಜೊತೆಗೆ, ಕಾಲೋಚಿತವಾದ ಭೌತ್ತಿಕ ಸಂಪತ್ತುಗಳನ್ನೂ ಗಳಿಸಬೇಕು. ಒಂದು ಹೊತ್ತಿನ ಆಹಾರವನ್ನೂ ಹೊಂದಿಸಲಾಗದೆ ನೊಂದಿರುವಾಗಲೂ, ಸ್ವಂತ ದುಃಖವನ್ನೂ, ನೋವುಗಳೆಲ್ಲವನ್ನೂ “ಇತರರು ಅರಿಯದಿರಲಿ, ಅವರಿಗೆ ಕಷ್ಟವಾಗದಿರಲಿ” ಎಂದು ಯೋಚಿಸುವ ಕುಂಟುಬಗಳಾಗಿದ್ದವು – ಅಮ್ಮನ ಗ್ರಾಮದಲ್ಲಿ. ಈ ರೀತಿಯ ಕುಟುಂಬಗಳು ಇಂದಿಗೂ ಭಾರತದಲ್ಲಿ ಹಲವಾರು ಇವೆಯೆಂಬುದು ಗ್ರಾಮಗಳಲ್ಲಿ ಸೇವೆಯನ್ನು ಮಾಡಲು ಹೋದ ಅಮ್ಮನ ಮಕ್ಕಳು ಹೇಳಿದಾಗ ಅರಿಯಲು ಸಾಧ್ಯವಾಯಿತು. ನಾವು ಆಲೋಚಿಸಿದರೆ ಇತರರ ದುಃಖಗಳನ್ನು, ದುರಿತಗಳನ್ನು ಬಹಳಷ್ಟು ಬದಲಾಯಿಸಲು ಸಾಧ್ಯವಿದೆ. ಒಳಗೆ ಕರುಣೆಯು ಉದಯಿಸುವಾಗ ಮಾತ್ರವೇ ಮನುಷ್ಯ ಮನುಷ್ಯನಾಗುವುದು

UNESCO chair is being announced for Amrita University

ಸ್ಪಷ್ಟತೆಯನ್ನು ನೀಡುವಂತದ್ದಾಗಿರಬೇಕು ವಿದ್ಯಾಭ್ಯಾಸ

’ಜಿಮ್ ಗೆ’ ಹೋಗಿ ಕೈಗಳ ’ಮಜ಼ಲ್’ ಮಾತ್ರ ಬೆಳೆಸುವ ವ್ಯಾಯಾಮವನ್ನು ಮಾಡುವಹಾಗೆಯಿದೆ ಸಮಾಜದಲ್ಲಿ ಇಂದಿನ ವಿದ್ಯಾಭ್ಯಾಸ. ಹಾಗೆ ಮಾಡಿದರೆ, ಆ ಭಾಗದ ಮಜ಼ಲ್ ಗಳು ಮಾತ್ರ ಬಳೆದು ಶರೀರದ ಉಳಿದ ಭಾಗಗಳೆಲ್ಲವೂ ಅನುಪಾತವಿಲ್ಲದೆ ವಿಕೃತವಾಗಿ ಹೋಗುತ್ತದೆ. ಇದರಂತೆಯೇ, ಇಂದು ದೊರಕ್ಕುತ್ತಿರುವ ವಿದ್ಯಾಭ್ಯಾಸವು, ಬುದ್ಧಿ ನೆನಪಿನಶಕ್ತಿ ಬೆಳದ ಮನುಷ್ಯನನ್ನು ಅತ್ಯಂತ ಹೆಚ್ಚು ಉತ್ಪಾದಕಶಕ್ತಿಯನ್ನು ಹೊಂದಿದ ಯಂತ್ರಗಳಾಗಿಸುವಂತಹದ್ದಾಗಿದೆ.

ಮಾತಿನಲ್ಲೂ ಆಲೋಚನೆಯಲ್ಲಿಯೂ ನಡತೆಯಲ್ಲಿಯೂ ದೃಷ್ಟಿಕೋನದಲ್ಲಿಯೂ ಸಂಸ್ಕಾರದ ಸ್ಪಷ್ಟತೆಯನ್ನು ನೀಡುವಂತದ್ದಾಗಿರಬೇಕು ವಿದ್ಯಾಭ್ಯಾಸ. ಅದು ಸಕಲ ಜೀವರಾಶಿಗಳ ಅಖಂಡತೆಯನ್ನುದ್ದೇಶಿಸಿ ಅರಿವನ್ನು ಮನುಷ್ಯನಲ್ಲಿ ಸೃಷ್ಟಿಸುವಂಥದ್ದಾಗಿರಬೇಕು.

’ನಾನು ಎಂದಿಗೂ ಜಯಿಸಬೇಕು’ ಎಂದೇ ಎಲ್ಲರೂ ಯೋಚಿಸುವುದು. ’ನಾನು ನಾನು ನಾನು’ ಎಂದಾಗಿ ಎಲ್ಲರ ಮುಖ್ಯ ಅಭಿಮತ ಹಾಗು ಧ್ಯೇಯವಾಕ್ಯವಾಗಿದೆ. ಈ ವಿಧದಲ್ಲಿ ಫಲವನ್ನು ಮಾತ್ರ ನಿರೀಕ್ಷಿಸಿ ಕರ್ಮವನ್ನು ಮಾಡುವಾಗ ಎಂಥದ್ದೇ ಹೀನಕೃತ್ಯವನ್ನು ಕೂಡ ಮಾಡಲು ಮನುಷ್ಯ ಹಿಂಜರಿಯುವುದಿಲ್ಲ. ಕಾರಣ ’ನನ್ನನ್ನು’ ಬಿಟ್ಟು ಉಳಿದವರೆಲ್ಲರೂ ಶತ್ರುಗಳಾಗಿಬಿಡುತ್ತಾರೆ. ಎಲ್ಲ ಸ್ವಂತ ತನ್ನ ಅಧೀನದಲ್ಲಿರಬೇಕು ಎಂಬ ಮನುಷ್ಯನ ನೀಚವಾದ ಈ ಸ್ಪರ್ಧಾತ್ಮಕ ಬುದ್ಧಿಯು ಅವನ ಕರ್ಮಗಳನ್ನು ಅಪ್ರಾಮಾಣಿಕ ಹಾಗು ಅಪೂರ್ಣವೂ ಆಗಿಸುವುದು. ಕರ್ಮದಲ್ಲಿ ಅನ್ವಯಿಸುವ ಸಂತೋಷವು ಹಾಗು ಜವಾಬ್ದಾರಿಯು ಫಲವನ್ನು ಪೂರ್ಣತೆಗೆ ಮುಟ್ಟಿಸುವುದು.

ಪ್ರಾಮಾಣಿಕ ಸಹಕಾರ ಹಾಗು ಗೆಳೆತನ, ಉತ್ಪಾದಕಶಕ್ತಿಯನ್ನು, ಗುಣಮಟ್ಟತೆಯನ್ನು ವರ್ಧಿಸುತ್ತದೆ. ಬದಲಿಗೆ ಅಧಮವಾದ ಪೈಪೋಟೀತನವಲ್ಲ. ಅದೇ ವ್ಯಕ್ತಿಗಳನ್ನು, ಸಮಾಜವನ್ನು, ಉನ್ನತ ಸ್ಥಾನಗಳನ್ನು ಮೀರಿಸಲು ಸಹಾಯಕವಾಗುತ್ತದೆ. ಮಕ್ಕಳೆ, ಜೇನುದುಂಬಿಗಳನ್ನು ಗಮನಿಸಿಲ್ಲವೆ? ಅವುಗಳ ಉತ್ಪಾದಕಶಕ್ತಿಯ, ಜೇನುತುಪ್ಪದ ಗುಣಮಟ್ಟತ್ತೆಯ, ಪರಿಶುದ್ಧತೆಯ ರಹಸ್ಯವೇನು? ಅವುಗಳ ಪರಸ್ಪರ ಸಹಾಯಕ ಗುಣ, ಗೆಳೆತನ, ಐಕ್ಯತೆ. ಎಲ್ಲಕ್ಕಿಂತಲೂ ಮಿಗಿಲಾಗಿ ಸ್ವಂತ ಕರ್ಮದಲ್ಲಿ ಆ ಜೀವಿಗಳು ತೋರುವ ಅಚ್ಚರಿಸುವ ಶ್ರದ್ಧೆ.

-ಅಮ್ಮನ ೬೩ನೇ ಜನ್ಮದಿನದ ಸಂದೇಶದಿಂದ ಆಯ್ದಭಾಗಗಳು

ಮೇರೆ ಇಲ್ಲದ, ಭೇದವಿಲ್ಲದ ಅಖಂಡವಾದ ಏಕತ್ವವೇ ಭಗವಂತ. ಆ ಭಗವತ್ದಶಕ್ತಿಯು ಪ್ರಕೃತಿಯಲ್ಲಿ, ಪರಿಸರದಲ್ಲಿ, ಮೃಗಗಳಲ್ಲಿ, ಮನುಷ್ಯರಲ್ಲಿ, ಗಿಡಗಳಲ್ಲಿ, ಮರಗಳಲ್ಲಿ, ಪಕ್ಷಿಗಳಲ್ಲಿ ಪ್ರತಿಯೊಂದು ಕಣಕಣದಲ್ಲಿಯೂ ತುಂಬಿತುಳುಕುತ್ತಿದೆ. ಜಡ ಚೈತನ್ಯಗಳೆಲ್ಲವೂ ಭಗವತ್ದಮಯವಾಗಿದೆ. ಈ ಸತ್ಯವನ್ನು ಅರಿತರೆ ನಮಗೆ ನಮ್ಮನ್ನು, ಇತರರನ್ನು, ಈ ಲೋಕವನ್ನು ಪ್ರೇಮಿಸಲು ಮಾತ್ರವೇ ಸಾಧ್ಯ.

ಪ್ರೇಮದ ಮೊದಲ ತರಂಗವು ನಮ್ಮಿಂದಲೇ ಪ್ರಾರಂಭವಾಗಬೇಕು. ನಿಶ್ಚಲವಾಗಿರುವ ಸರೋವರದಲ್ಲಿ ಕಲ್ಲೊಂದನ್ನು ಎಸೆದರೆ, ಮೊದಲ ಪುಟ್ಟ ತರಂಗವು ಆ ಕಲ್ಲಿನ ಸುತ್ತಲು ಪ್ರಕಟವಾಗುತ್ತದೆ. ಕ್ರಮೇಣ ಆ ತರಂಗದ ವೃತ್ತವು ದೊಡ್ಡದಾಗುತ್ತಾ ದೊಡ್ಡದಾಗುತ್ತಾ ಅದು ಹಾಗೇ ತೀರವನ್ನು ಮುಟ್ಟುತ್ತದೆ. ಇದರಂತೆಯೇ, ಪ್ರೇಮವು ನಮ್ಮೊಳಗಿನಿಂದ ಪ್ರಾರಂಭವಾಗಬೇಕು. ಅವನವನ ಒಳಗೆ ಸುಪ್ತವಾಗಿರುವ ಪ್ರೇಮವನ್ನು ಪರಿಶುದ್ಧವಾಗಿಸಲು ಸಾಧ್ಯವಾದರೆ, ಕ್ರಮೇಣ ಆ ಪ್ರೇಮ ಬೆಳದು ದೊಡ್ಡದಾಗಿ ಇಡೀ ಲೋಕವನ್ನೇ ಬಳಸುತ್ತದೆ.

ಒಂದು ಪಾರಿವಾಳದ ಕೊರಳಿಗೆ ಭಾರವಿರುವ ಒಂದು ಕಲ್ಲನ್ನು ಕಟ್ಟಿಬಿಟ್ಟರೆ, ಅದಕ್ಕೆ ಹಾರಲು ಸಾಧ್ಯವಾಗುವುದಿಲ್ಲ. ಅದರಂತೆಯೇ, ಪ್ರೇಮವೆಂಬ ಪಾರಿವಾಳದ ಕೊರಳಿಗೆ ನಾವು ಬಂಧನಗಳ ಹಾಗು ನಿಯಮಗಳ ಕಲ್ಲುಗಳನ್ನು ಕಟ್ಟಿದ್ದೇವೆ. ಅದಕ್ಕೆ ಸ್ವಾತಂತ್ರ್ಯದ ವಿಶಾಲವಾದ ಆಕಾಶದಲ್ಲಿ ಹಾರಾಡಲು ಸಾಧ್ಯವಿಲ್ಲ. ಅಂಧವಾದ ಮಮತೆಯ ಸರಪಳಿಯಿಂದಾಗಿ ಒಳಗಿರುವ ಪ್ರೇಮವನ್ನು ಅಲ್ಲಿಯೇ ಬಂಧಿಸಿಟ್ಟಿದ್ದೇವೆ. ಪ್ರೇಮವಿಲ್ಲದಿದ್ದರೆ ಜೀವನವಿಲ್ಲ. ಯಾವುದೇ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಸಾಧ್ಯವಿಲ್ಲ.

ಎರಡು ವ್ಯಕ್ತಿಗಳು ಒಟ್ಟಿಗೆ ಬಾಳಲು ಪ್ರಾರಂಭಿಸುವಾಗ, ಘರ್ಷಣೆಯುಂಟಾಗುವುದು ಸ್ವಾಭಾವಿಕ. ಪರಸ್ಪರ ಬಿಟ್ಟುಕೊಡುವುದಿಲ್ಲದೇ ಹೋದರೆ, ಸ್ವಲ್ಪವಾದರೂ ಹೊಂದಾಣಿಕೆಯಿಲ್ಲದೇ ಹೋದರೆ, ನಮ್ಮಯ ಕೌಟುಂಬಿಕ ಬಂಧಗಳು ಮುರಿದು ಬೀಳುತ್ತದೆ. ಕ್ಷಮೆ ಮತ್ತು ತಾಳ್ಮೆ ಜೀವನದ ವಸಂತ ಋತುಗಳಂತೆ. ಈ ಗುಣಗಳಿಲ್ಲದ್ದಿದ್ದಲ್ಲಿ, ಜೀವನ ಬೇಸಿಗೆಯ ಬೇಗೆಯಲ್ಲಿ ಸುಟ್ಟು ಬರಡಾದ ಬಂಜರ ಭೂಮಿಯಂತಾಗುತ್ತದೆ. ಅಲ್ಲಿ ಹೂಗಳು, ಮರಗಳು, ನದಿಗಳ ಕಳರವಗಳು, ಪಕ್ಷಿಗಳ ಚಿಲಿಪಿಲಿನಾದಗಳಾವುವೂ ಇರುವುದಿಲ್ಲ. ಪ್ರೇಮವೇ – ಕೋಡುವವನಿಗೆ ತೆಗೆದುಕೊಳ್ಳುವವನಿಗಿಂತಲೂ ಅಧಿಕ ಸಂತೋಷವನ್ನು ನೀಡುವ ಧನ. ಕೈಯಲ್ಲಿದ್ದೂ ಕಾಣದ ಧನವದು. ಪ್ರೇಮದ ಹೆಜ್ಜೆಗುರುತುಗಳು ಮಾತ್ರವೇ ಕಾಲದ ಪಥದಲ್ಲಿ ಎಂದಿಗೂ ಅಳಿಯದೇ ಉಳಿಯುವುದು. ತನಗಿಂತಲೂ ಶಕ್ತಿಶಾಲಿಯಾದ ಶತ್ರುವನ್ನೂ ನಾಶಮಾಡುವ ಆಯುಧ ಪ್ರೇಮವೇ. ನಿತ್ಯಮುಕ್ತನಾದ ಭಗವಂತನನ್ನೂ ಹಿಡಿದು ಕಟ್ಟುವುದೂ – ಪ್ರೇಮವೇ. ಮಾಯೆಯ ಹಿಡಿತದಿಂದ ಪಾರಾಗುವ ಮಂತ್ರವೂ ಪ್ರೇಮವೇ ಆಗಿದೆ. ಎಲ್ಲಾ ದೇಶಗಳಲ್ಲಿ, ಎಲ್ಲಾ ಕಾಲಗಳಲ್ಲಿ ಬೆಲೆಬಾಳುವ ನಾಣ್ಯವುವೊಂದೆ – ಪ್ರೇಮ.

ಪ್ರೇಮ ಜೇಬಿನಲ್ಲಿ ಬಚ್ಚಿಟ್ಟುಕೊಳ್ಳುವಂಥದ್ದಲ್ಲ, ಕರ್ಮದೊಂದಿಗೆ ಪ್ರಕಾಶಮಾನವಾಗಿಸುವಂಥದ್ದು. ನಾವು ಪ್ರೇಮವೇ ಆಗಿಹೋಗುವಾಗ ಪಂಚೇಂದ್ರಿಯಗಳೂ ಪ್ರೇಮದ ಸೇತುವೆಗಳಾಗಿ ಮಾರ್ಪಡುತ್ತದೆ. ಯಾರ ಅಹಂಕಾರಕ್ಕೂ ಎದುರಿಸಿ ಸೋಲಿಸಲು ಸಾಧ್ಯವಾಗದ ಒಂದೇ ಒಂದೆಂದರೆ ಪ್ರೇಮ. ದುಃಖಗಳಿಗೆ ಏಕೈಕ ವಿಕಿರಮ ಪ್ರಮಾಣದ ಔಷಧವೂ ಏಕಾಂಗೀತನದ ಊರುಗೋಲು – ಪ್ರೇಮವೇ. ನಮ್ಮ ಜೀವನದ ಸಫಲತೆಯ ಸರಿಯಾದ ಅಳತೆಗೋಲೆಂಬುದು ಒಂದೇ – ಅದು ಪ್ರೇಮ ಮಾತ್ರ!

– ಅಮ್ಮನ ೬೩ನೇ ಜನ್ಮದಿನದ ಸಂದೇಶದಿಂದ ಆಯ್ದಭಾಗಗಳು

ಜುಲೈ ೨೧, ೨೦೧೫, ಫ್ರಾನ್ಸ್ ನ ರಾಜಧಾನಿಯಾದ ಪ್ಯಾರಿಸ್ ನಲ್ಲಿ – “ಕ್ಲೈಮ್ಯಾಕ್ಟಿಕ್ ಕಾನ್ ಶನ್ಸ್” ಕುರಿತು ನಡೆದ ಶೃಂಗ ಸಭೆಗೆ ಕಳುಹಿಸಲಾದ ಅಮ್ಮನ ವಿಡಿಯೋ ಸಂದೇಶ.

“ಪ್ರೇಮ ಸ್ವರೂಪಿಗಳು ಆತ್ಮಸ್ವರೂಪಿಗಳಾದ ಎಲ್ಲರಿಗೂ ನಮಸ್ಕಾರ.

ಕೆಲವು ಮಕ್ಕಳು ಹೇಳುತ್ತಾರೆ, ’ತಲೆಸುತ್ತುತ್ತಾ ಇದೆ ಅಮ್ಮ, ಬೀಳುವಂತಾಗುತ್ತಿದೆ, ಬ್ಯಾಲೆಂಸ್ ಹೋಗುತ್ತಿದೆ’ ಎಂದು. ಅದು ಕಿವಿಗಳೊಳಗಿರುವ ಒಂದು ಬಗ್ಗೆಯ ಅಣುಕೋಶಗಳಿಗೆ ಉಂಟಾಗುವ ಅಲುಗಾಟದಿಂದಾಗಿ ಈರೀತಿ ಉಂಟಾಗುವಂಥದ್ದು. ಸರಿಹೋಲುವಂತೆ ಅದೇ ಅವಸ್ಥೆಯಂತೆ ಇಂದು ಪ್ರಕೃತಿಯ ಅವಸ್ಥೆಯೂ ಕೂಡ. ಹಾಗಾಗಿ ಬಂದೂಕಿನ ಮುಂದೆ ನಿಂತಿರುವಾಗ ಉಂಟಾಗುವ ಶ್ರದ್ಧೆಯು ಜಾಗರೂಕತೆಯು ಎಲ್ಲರಿಗೂ ಉಂಟಾಗಬೇಕು.

ನನ್ನ ಚಿಕ್ಕವಯಸ್ಸಿನಲ್ಲಿ ಅಮ್ಮನ* ಗ್ರಾಮದಲ್ಲಿ ಉಂಟಾದ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಒಂದು ದಿನ ಹತ್ತಿರದ ಮನೆಯೊಂದಕ್ಕೆ ಅಮ್ಮ ಹೋದಾಗ ಕಂಡ ದೃಶ್ಯವಿದು. ತಂದೆತಾಯಿಯ ಮಡಿಲಲ್ಲಿ ಅವರ ಹನ್ನೊಂದು ಮಕ್ಕಳು ದಣಿದು ಮಲಗಿದ್ದಾರೆ. ’ನೆನ್ನೆ ಅಡುಗೆಯೇನು ಮಾಡಿಲ್ಲ ಹಾಗಾಗಿ ಮರಗೆಣಿಸಿನ ಸಿಪ್ಪೆಯಿಲ್ಲ ಮಗಳೆ’ ಎಂದು ನನಗೆ ಹೇಳಿದರು**. ಆಗ ನಾನು ಕೇಳಿದೆ ಯಾರಬಳಿಯಾದರು ಸಾಲಮಾಡಿ ಮಕ್ಕಳಿಗೆ ಅಡುಗೆ ಮಾಡಿ ಊಟ ಹಾಕಬಾರದಾಗಿತ್ತೆ ಎಂದು. ಅವರು ಹೇಳಿದರು, ’ತಂದೆ ಕೆಲಸಕ್ಕೆ ಹೋಗಿ ಏನೂ ಸಿಗದೆ ಹಿಂತಿರುಗಿ ಬಂದರು. ನಂತರ ಹತ್ತು ಕಿಲೋಮೀಟರು ದೂರದಲ್ಲಿರುವ ಬಂಧು ಒಬ್ಬರ ಮನೆಗೆ ಹಣವನ್ನು ಸಾಲಕ್ಕಾಗಿ ಪಡೆಯಲು ನಡೆದೇ ಹೋದರು ಆದರೆ ಹಣ ಸಿಗಲಿಲ್ಲ. ಹಿಂತಿರುಗಿ ಬರುವಾಗ ರಾತ್ರಿಯಾಗಿತ್ತು. ಆದರೆ ಬೆಳದಿಂಗಳ ರಾತ್ರಿಯಾದ ಕಾರಣ ಕಡಲ ತೀರದ ಮಾರ್ಗವಾಗಿ ಬರುವಾಗ ಆಮೆಯೊಂದು ಕಡಲದಂಡೆಯೇರಿ ಮೊಟ್ಟೆಯಿಡುತ್ತಿರುವುದನ್ನು ಕಂಡ. ಆಮೆ ಮೊಟ್ಟೆಯಿಟ್ಟು ಮರಳಿಹೋದ ಬಳಿಕ ಅದರಿಂದ ಕೆಲವು ಮೊಟ್ಟೆಗಳನ್ನು ತೆಗೆದುಕೊಂಡು ಬಂದು ಮಕ್ಕಳಿಗೆ ಎರಡು ಮೂರು ಮೊಟ್ಟೆ ಬೇಯಿಸಿ ಕೊಟ್ಟರು’ ಎಂದು ಹೇಳಿದಳು. ಆಗ ಮಗನೊಬ್ಬನು ಎದ್ದು ಕೇಳಿದನು. ’ಅಪ್ಪಾ ಎಲ್ಲ ಮೊಟ್ಟೆಗಳನ್ನು ಏಕೆ ತೆಗೆದುಕೊಂಡುಬರಲಿಲ್ಲ? ಆಗ ಇನ್ನಷ್ಟು ತಿನ್ನಬಹುದಾಗಿತ್ತಲ್ಲಾ.’ಎಂದು. ಆಗ ಆ ತಂದೆ ತನ್ನ ಮಗನಿಗೆ ಹೇಳಿದ, ’ಮಗನೇ! ನೀವೆಲ್ಲರೂ ಮರಣಹೊಂದಿದರೆ ನಾನು ಎಷ್ಟು ದುಃಖಕ್ಕೀಡಾಗಬಹುದೋ ಅಂತೆಯೇ ಎಲ್ಲಾ ಮೊಟ್ಟೆಗಳನ್ನು ತೆಗೆದುಕೊಂಡಲ್ಲಿ ಆ ಆಮೆಯೂ ದುಃಖಕ್ಕೀಡಾಗಬಹುದು. ಅದು ಮಾತ್ರವಲ್ಲ ಅದರ ಪರಂಪರೆ ನೆಲೆನಿಂತರಲ್ಲವೇ ಊಟಕ್ಕಿಲ್ಲದಾಗುವ ಸರಿಸ್ಥಿತಿಯಲ್ಲಿ ಹಸಿವನ್ನು ಹಿಂಗಿಸಿಕೊಳ್ಳಲು ಈರೀತಿಯಂತೆ ಸ್ವಲ್ಪವಾದರೂ ಸಿಕ್ಕಬಹುದು.

ಹಾಗಾದಲ್ಲಿ ನೋಡಿ ಇಲ್ಲಿ ತಾನು ಹಸಿವಿನಿಂದ್ದಿದ್ದರೂ ಬೇರೆಯವರ ವೇದನೆ ಸ್ಮರಿಸಿಕೊಳ್ಳುತ್ತಿದ್ದಾನೆ. ತನ್ನ ದುಃಖದಲ್ಲಿಯೂ ಇನ್ನೊಬ್ಬರ ಪ್ರತಿ ಕಾರುಣ್ಯವನ್ನು ತೋರುತ್ತಿದ್ದಾನೆ. ಆ ಒಂದು ಮನೋಭಾವವಾಗಿತ್ತು ನಮ್ಮ ಪೂರ್ವಜರಿಗೆ ಇದ್ದದ್ದು. ಆದರೆ ಇಂದು ಆಮೆಯನ್ನೂ ಹಾಗು ಎಲ್ಲವನ್ನೂ ಹಣಕ್ಕಾಗಿ ರಫ್ತುಮಾಡುತ್ತಾರೆ. ಒಂದೊಂದು ವೃಕ್ಷವನ್ನು ಕತ್ತರಿಸುವಾಗಲೂ ಅದು ನಮಗೆ ಶವಪೆಟಿಗೆಯನ್ನು ನಿರ್ಮಾಣ ಮಾಡುವ ಸಲುವಾಗಿ ವೃಕ್ಷಗಳನ್ನು ಕತ್ತರಿಸುತ್ತಿರುವಂತೆ ಆಗಿಹೋಗುತ್ತಿದೆ. ಬಹಳಷ್ಟು ವೃಕ್ಷಗಳನ್ನು ಕತ್ತರಿಸಿಯಾಗಿದೆ. ಆಗ ಒಂದು ವೃಕ್ಷವನ್ನು ಕತ್ತರಿಸಿದರೆ ಒಂದು ವೃಕ್ಷವನ್ನು ನೆಟ್ಟರೆ ಸಾಲದು, ಕನಿಷ್ಠ ಸುಮಾರು ನಲವತ್ತು ಐವತ್ತು ವೃಕ್ಷಗಳನ್ನಾದರೂ ಈ ಅವಸ್ಥೆಯಲ್ಲಿ ನೆಡಬೇಕು.

ಈಗ ಸುಮಾರು ಐದು ಲಕ್ಷ ಜನರಿಗೆ ಪರಿಸರ ಮಾಲಿನ್ಯದಿಂದಾಗಿ ಕ್ಯಾನ್ಸರ್ ತಗುಲಿದೆ. ಹಿಂದೆ ನಮಗೆ ಗಾಯವಾದಲ್ಲಿ ಶೆಗಣಿಯನ್ನು ಗಾಯಕ್ಕೆ ಹಚ್ಚಿ ಗುಣಪಡಿಸುತ್ತಿದ್ದರು. ಗಾಯ ಕೊಳೆತುಹೋಗದಿರಲು ಶೆಗಣಿಯನ್ನು ಹಚ್ಚಲಾಗುತ್ತಿತ್ತು. ಆದರೆ ಈಗ ಗಾಯಕ್ಕೆ ಶೆಗಣಿ ತಾಕಿದರೆ ಗಾಯ ಕೊಳೆತುಹೋಗುತ್ತದೆ. ಅಂದು ಔಷಧವಾಗಿದ್ದದ್ದು ಇಂದು ವಿಷವಾಗಿದೆ.

ಪ್ರಪಂಚದಲ್ಲಿ ಯಾವುದೂ ನಿಕೃಷ್ಟವಲ್ಲ. ಒಂದು ವಿಮಾನದ ಎಂಜಿನ್ ಕೆಟ್ಟುಹೋದಲ್ಲಿ ಹಾರಲು ಸಾಧ್ಯವಿಲ್ಲ, ಒಂದು ಸ್ಕ್ರೂ ಇಲ್ಲದ್ದಿದ್ದರೂ ಹಾರಲು ಸಾಧ್ಯವಿಲ್ಲ. ಎಲ್ಲಕ್ಕೂ ಅದರದ್ದೇ ಆದ ಸ್ಥಾನವಿದೆ. ಜೇನುನೊಣ ಪುಷ್ಪಪರಾಗ ಉದುರಿಸಿ ಗರ್ಭೋತ್ಪತ್ತಿ (ಪಾಲಿನೇಶನ್) ಮಾಡುವುದರಿಂದಾಗಿಯೇ ನಮಗೆ ಫಲಗಳು, ತರಕಾರಿಗಳು ದೊರಕ್ಕುತ್ತಿರುವುದು. ಆ ಜೇನುನೊಣವು ಮೂರು ಕಿಲೋಮೀಟರ್ ದೂರದವರೆಗೆ ಹಾರಾಡುತ್ತಿತ್ತು. ಹೂಗಳಿಗೆ ಹೆಚ್ಚು ಹೆಚ್ಚು ಕ್ರಿಮಿನಾಶಕ ಔಷಧಗಳನ್ನು ಸಿಂಪಡಿಸುವ ಕಾರಣ ಇಂದು ಆ ಜೇನುನೊಣಗಳಿಗೆ ನೆನಪಿನ ಶಕ್ತಿ ಹೊರಟುಹೋಗಿದೆ. ಹಾಗಾಗಿ ಹೂಗಳಿರುವ ಗಿಡಗಳು, ಜೇನುಗೂಡುಗಳು ಎಥೇಚ್ಚವಾಗಿ ಬೇಕಾಗಿದೆ. ನಮ್ಮ ಲಕ್ಷಾಂತರ ಭಕ್ತರುಗಳು ಇದನ್ನು ಮಾಡುತ್ತಿದ್ದಾರೆ ಆದರೂ ಇನ್ನೂ ಹೆಚ್ಚು ಭಕ್ತರು ಜಾಗರೂಕತೆಯಿಂದ ಜೇನುಗೂಡುಗಳನ್ನು ನಿರ್ಮಿಸಬೇಕು ಹಾಗು ಹೆಚ್ಚು ಹೆಚ್ಚು ಹೂಗಳನ್ನು ಬಿಡುವ ಗಿಡಗಳನ್ನು ನೆಡಬೇಕು.

ನಮ್ಮನ್ನು ಹೆಡೆದ ತಾಯಿ ಐದು ವಯಸ್ಸಿನವರೆಗೆ ನಮ್ಮನ್ನು ತನ್ನ ಮಡಿಲಲ್ಲಿ ಇರಿಸಿಕೊಳ್ಳಬಹುದು. ಭೂಮಿತಾಯಿ ಹಾಗಲ್ಲ! ನಮ್ಮ ಜೀವಿತಕಾಲ ಪೂರ್ತ ನಮ್ಮಯ ತುಳಿತವನ್ನು, ಅವಳ ಮೇಲೆ ಉಗುಳುವುದನ್ನು, ಅವಳನ್ನು ಬಗೆಯುವುದನ್ನು ಅನುಮತಿಸುವ ತಾಯಿಯವಳು. ಜೀವಿತಕಾಲ ಪೂರ್ತ ನಮ್ಮನ್ನು ಸಲಹಿ ಬೆಳೆಸುವ ಅಮ್ಮ ಅವಳು. ಎಲ್ಲದರ ಪೂಷಕ ಶಕ್ತಿಯಾಗಿರುವ ಅಮ್ಮ ಅವಳು. ಆ ತಾಯಿಯ ಪ್ರತಿ ನಮಗಿರುವ ಕರ್ತವ್ಯವನ್ನು ಮರೆಯಬಾರದು.

ಒಂದು ಕಟ್ಟಡದ ಮೊದಲನೇಯ ಮಹಡಿಯಲ್ಲಿ ಬೆಂಕಿಹೊತ್ತಿಕೊಂಡಾಗ ’ಅಯ್ಯೋ! ಓಡಿ ಬನ್ನಿ! ರಕ್ಷಿಸಿರಿ!’ ಎಂಬುದಾಗಿ ಕೇಳಿಬಂದ ಆರ್ಥಕೂಗಿಗೆ ಹತ್ತನೇ ಮಹಡಿಯಲ್ಲಿರುವ ಒಬ್ಬಾತ ’ಅದು ಅವನ ಸಮಸ್ಯೆ! ನನ್ನ ಸಮಸ್ಯೆಯಲ್ಲ’ ಎಂದು ಚಿಂತಿಸಿದರೆ ಕಡೆಗೆ ಅದು ನಮ್ಮದೇ ಸಮಸ್ಯೆಯಾಗಿ ಬರುತ್ತದೆ. ಇದನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಅವನ ಸಮಸ್ಯೆ ನಮ್ಮಯ ಸಮಸ್ಯೆಯೆಂದು ಎಣಿಸಿ ನಾವು ಬದಲಾಗಲೇಬೇಕು.

ಪ್ರಪಂಚಕ್ಕೆ ಒಂದು ತಾಳಲಯವಿದೆ. ಈ ವಿಶ್ವಕ್ಕೂ ಅದರೊಳಗಿರುವ ಜೀವಜಾಲಗಳಿಗೂ ಮಧ್ಯೆ ಅಭೇದ್ಯವಾದ ಬಾಂಧವ್ಯವುಂಟು. ಪರಸ್ಪರ ಬಂಧಿತವಾಗಿರುವ ನೆಟ್ವರ್ಕ್ನಂತೆ (ಅಂರ್ತಜಾಲದಂತೆ) ಈ ಪ್ರಪಂಚ. ನಾಲ್ಕುಜನ ಸೇರಿ ಒಂದು ಬಲೆಯನ್ನು ಹಿಡಿದಿರುವಾಗ ಎಲ್ಲಿಯೇ ಒಂದು ಸಣ್ಣ ಚಲನೆಯುಂಟಾದರೂ ಅದು ಉಳಿದ ಎಲ್ಲ ಕಡೆಯೂ ಪ್ರತಿಫಲಿಸುತ್ತದೆ. ಆದ್ದರಿಂದ ನಾವು ಅರಿತೋ ಅರಿಯೆದೆಯೋ ಒಂಟಿಯಾಗಿಯೋ ಅಥವಾ ಗುಂಪಾಗಿಯೋ ಮಾಡುವ ಎಲ್ಲಾ ಕರ್ಮಗಳು ಪ್ರಪಂಚವೆಂಬ ಬಲೆಯ ಮೂಲೆಯೊಂದರಲ್ಲಿ ಪ್ರತಿಫಲಿಸುತ್ತದೆ. ಅವರು ಬದಲಾದ ಮೇಲೆ ನಾವು ಬದಲಾಗುತ್ತೇವೆ ಎಂದು ಯೋಚಿಸಿದರೆ ಅದು ಸಾಧ್ಯವಿಲ್ಲ. ಅವರು ಬದಲಾಗದ್ದಿದ್ದರೂ ನಾವು ಬದಲಾದಲ್ಲಿ, ಪರಿವರ್ತನೆಯನ್ನು ತರಬಹುದು. ನಮಗೆ ಏನು ಮಾಡಲು ಸಾಧ್ಯವೆಂದು ನಾವು ನೋಡಬೇಕು.

ಮದರ್ಸ್ ಡೇ ಫಾದರ್ಸ್ ಡೇ ಯನ್ನು ಅದ್ದೂರಿಯಾಗಿ ಆಚರಿಸುವಂತೆ ನಾವೆಲ್ಲರೂ ಪ್ರಕೃತಿಯನ್ನು ಗೌರವಿಸುವ ಆರಾಧಿಸುವ ಒಂದು ದಿನ ಉಂಟಾಗಬೇಕು. ಅಂದು ಲೋಕದ ಎಲ್ಲ ಜನರು ಕಡ್ಡಾಯವಾಗಿ ಸಸಿಗಳನ್ನು ನೆಡಬೇಕು.

ಇದಕ್ಕೂ ಹಿಂದೆ ಮೂರುಸಾವಿರ ಚದುರ ಅಡಿ ಮನೆಯನ್ನು ನಿರ್ಮಿಸಿದವರು ಹಾಗು ಇನ್ನು ಮುಂದೆ ಮನೆಯನ್ನು ನಿರ್ಮಿಸಲು ಇಚ್ಚಿಸುವವರು ಸಾವಿರದ ಐನೂರು ಚದುರ ಅಡಿ ಮನೆಯನ್ನು ನಿರ್ಮಿಸಿ. ಎರಡು ಸಾವಿರ ಚದುರ ಅಡಿ ನಿರ್ಮಾಣದ ಉದ್ದೇಶವಿರುವವರು ಒಂದು ಸಾವಿರ ಚದುರ ಅಡಿ ಕಮ್ಮಿಮಾಡಿಕೊಳ್ಳಿ. ಒಂದು ಸಾವಿರ ಚದುರ ಅಡಿ ಕಟ್ಟಲು ಉದ್ದೇಶಿಸಿರುವವರು ಐನೂರು ಚದುರ ಅಡಿ ಕಮ್ಮಿಮಾಡಿಕೊಳ್ಳಿ. ಆಗ ಅಷ್ಟು ವೃಕ್ಷಗಳು ಸಮಾಜದಲ್ಲಿ ಕತ್ತರಿಸಲ್ಪಡುವುದು ಕಮ್ಮಿಯಾಗುವುದು. ವಿದ್ಯುಚ್ಛಕ್ತಿಯ ಬಳಕೆಯೂ ಕೂಡ ಕಮ್ಮಿಯಾಗುವುದು. ಅಷ್ಟೋಂದು ವೃಕ್ಷಗಳನ್ನು ನಾವು ನಾಶಮಾಡುವ ಅಗತ್ಯವಿಲ್ಲ. ಕಾರ್ ಪೂಲಿಂಗ್ ಮೂಲಕ ಇಂಧನದ ಉಳಿತಾಯವನ್ನು ಮಾಡಬಹುದು. ಈರೀತಿಯಲ್ಲಿ ಕ್ರಮ ಕ್ರಮವಾಗಿ ಬದಲಾವಣೆಯುಂಟಾದಲ್ಲಿ ಪ್ರಕೃತಿಯಲ್ಲಿ ಸ್ವಲ್ಪ ವ್ಯತ್ಯಾಸವನ್ನುಂಟುಮಾಡುವಲ್ಲಿ ಸಾಧ್ಯವಾಗುತ್ತದೆ. ಸಾವಿರ ಡಾಲರುಗಳ ಪೆನ್ ಖರೀದಿಸಿ ಬರೆಯಬಹುದು ಹಾಗೆಯೇ ನೂರು ಡಾಲರುಗಳ ಪೆನ್ ಖರೀದಿಸಿಯೂ ಬರೆಯಬಹುದು. ಅಕ್ಷರಗಳು ಮೂಡುತ್ತವೆ. ಆಡಂಬರವನ್ನು ತ್ಯಜಿಸಿದರೆ ತನಗೆ ಅಗತ್ಯವಿರುವುದನ್ನು ತೆಗೆದುಕೊಂಡು ಉಳಿದುದರಲ್ಲಿ ಇತರರಿಗೆ ಸಹಾಯವನ್ನು ನೀಡಬಹುದು.

ಒಂದು ದೊಡ್ಡ ಸರೋವರ ಮಲಿನವಾಗಿದೆಯೆಂದು ಭಾವಿಸಿ. ಹೇಗೆ ಅದನ್ನು ನಾವೊಬ್ಬರೇ ಒಂಟಿಯಾಗಿ ಸ್ವಚ್ಛವಾಗಿಸಲು ಸಾಧ್ಯವೆಂದು ಯೋಚಿಸಿ ಹತಾಶಗೊಂಡು ಹಿಂತಿರುಗಿ ಹೋಗುವುದಲ್ಲ ನಾವು ಮಾಡಬೇಕಿರುವುದು. ನಮಗೆ ಸಾಧ್ಯವಾಗುವಷ್ಟು ಸ್ವಚ್ಛವಾಗಿಸುವ. ಅದನ್ನು ನೋಡಿ ಮತ್ತೊಬ್ಬ ವ್ಯಕ್ತಿ ಸ್ವಚ್ಛವಾಗಿಸುತ್ತಾನೆ. ಅದನ್ನು ನೋಡಿ ಮತ್ತೊಬ್ಬ ವ್ಯಕ್ತಿ ಬರುತ್ತಾನೆ. ಹಾಗೆ ಸ್ವಚ್ಛವಾಗಿಸುತ್ತಾ, ಸ್ವಚ್ಛವಾಗಿಸುತ್ತಾ ಇಡೀ ಸರೋವರವೇ ಸ್ವಚ್ಛವಾಗುತ್ತದೆ. ಆದ್ದರಿಂದಾಗಿ ಹಿಂದೆಸರಿಯುವುದಲ್ಲ ಮಾಡಬೇಕಾಗಿರುವುದು ಬದಲಿಗೆ ಶ್ರಮಿಸಬೇಕು.

ಕಾರ್ ಪೂಲಿಂಗ್ ಮಾಡುವುದನ್ನು, ಜೇನುನೊಣಗಳನ್ನು ಪಾಲಿಸುವುದನ್ನು, ಸಸಿಗಳನ್ನು ನೆಡುವುದನ್ನು, ಅಂತರೀಕ್ಷವನ್ನು ಶುದ್ಧೀಕರಿಸುವುದನ್ನು, ಪ್ರಕೃತಿಯನ್ನು ಮಾಲಿನ್ಯ ಮುಕ್ತವಾಗಿಸುವುದನ್ನು, ತರಕಾರಿಗಳನ್ನು ಬೆಳೆಯುವುದನ್ನು ಎಷ್ಟೋ ವರ್ಷಗಳ ಹಿಂದೆಯೇ ಅಮ್ಮ ಹೇಳುತ್ತಿದ್ದೂ, ಅಮ್ಮನ ಮಕ್ಕಳು ಅವನ್ನು ಕಾರ್ಯಗತ ಗೊಳಿಸುತ್ತಿದ್ದಾರೆಯೂ ಕೂಡ. ಮತ್ತೊಮ್ಮೆ ಜಾಗೃತರಾಗಿ ಎಲ್ಲರೂ ಒಗ್ಗೂಡಿದರೆ ಈ ಭೂಮಿಯನ್ನು ನಮಗೆ ಸ್ವರ್ಗವಾಗಿಸಲು ಸಾಧ್ಯವಿದೆ. ಇದಾಗಲು ಕೃಪೆಯು ಎಲ್ಲರನ್ನು ಅನುಗ್ರಹಿಸಲೀ ಎಂದು ಪರಮಾತ್ಮನಲ್ಲಿಯೇ ಪ್ರಾರ್ಥಿಸುತ್ತೇನೆ.”

******
ಪ್ಯಾರೀಸ್ ನಲ್ಲಿ ನಡೆದ “ಕ್ಲೈಮ್ಯಾಕ್ಟಿಕ್ ಕಾನ್ ಶನ್ಸ್” ಶೃಂಗ ಸಭೆಗೆ ಅಮ್ಮನನ್ನು ಫ್ರೆಂಚ್ ರಾಷ್ಟ್ರಪತಿಗಳಾದ ಫ್ರಾನಕೊಯಿಸ್ ಹೊಲ್ಲಾಂಡೆ ಅವರ ವಿಶೇಷ ರಾಜಪ್ರತಿನಿಧಿಯ ಮೂಲಕ ಆಹ್ವಾನಿಸಲ್ಪಟ್ಟಿದ್ದರೂ ತಮ್ಮ ಏಳುವಾರಗಳ ಅಮೆರಿಕೆಯ ಸಂದರ್ಶನಾಯಾತ್ರೆಯ ಕಾರಣದಿಂದಾಗಿ ಅಮ್ಮನಿಗೆ ಪ್ರಾಕೃತಿಕವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಮ್ಮನ ಪ್ರತಿನಿಧಿಯಾಗಿ ಮಾತಾ ಅಮೃತಾನಂದಮಯಿ ಮಠದ ಉಪಾಧ್ಯಕ್ಷರಾದ ಸ್ವಾಮಿ ಅಮೃತಸ್ವರೂಪಾನಂದ ಪುರಿಗಳು ಅಮ್ಮನ ಸಂದೇಶವನ್ನು ಸಭೆಯಲ್ಲಿ ಪ್ರಸ್ತುತಪಡಿಸಿದರು.

ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ಯಾರಿಸ್ ನಲ್ಲಿ ನಡೆಯಲಿರುವ “ಸುಸ್ಥಿರ ಅಭಿವೃದ್ಧಿ” ಕುರಿತ ಶೃಂಗ ಸಭೆಯಾದ “ಕಾಪ್ ೨೧” ಗೆ ಶಕ್ತಿಶಾಲಿಯೂ ಫಲಪ್ರದವೂ ಆದ ನೀತಿಗಳನ್ನು ರೂಪಿಸಬೇಕೆಂಬ ಅವಶ್ಯಕತೆಯನ್ನು ಸಾರ್ವತ್ರಿಕವಾಗಿ ವಿಶ್ವದ ಪ್ರಮುಖ ಆಧ್ಯಾತ್ಮಿಕ, ಧಾರ್ಮಿಕ, ಮಾನವೀಯ ಸಂಸ್ಥೆಗಳ ನಾಯಕರುಗಳು ಭಾಗವಹಿಸಿದ ಶೃಂಗ ಸಭೆಯು ಸೂಚಿಸಿತು. ಕಾನ್ಸ್ಟಾಂಟಿನೋಪಲ್ ಆರ್ಚ್ಬಿಷಪ್ ಬಾರ್ಥಲೋಮಿಯೋ ೧, ಸಂಯುಕ್ತ ರಾಷ್ಟ್ರಗಳ ಭೂತಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಎಮ್.ಕೋಫಿ ಹನ್, ನೋಬೆಲ್ ಪೀಸ್ ಪ್ರಶಸ್ತಿವಿಜೇತ ಡಾ| ಮೊಹಮದ್ ಯೂನಸ್, ನಟ ಮತ್ತು ಸಮಾಜ ಸೇವಕನೂ ಆದ ಆರ್ನಾಲ್ಡ್ ಶ್ವಾಜ಼್ನೇಗರ್, ಮುಂತಾದ ವಿಶ್ವದ ಅನೇಕ ರಾಷ್ಟ್ರಗಳ ಧಾರ್ಮಿಕ ಮುಖಂಡರುಗಳು, ಆಡಳಿತ ನಾಯಕರುಗಳು, ರಾಜಕೀಯ ಧುರೀಣರು, ಸಂಯುಕ್ತ ರಾಷ್ಟ್ರಗಳ ವಿವಿಧ ಸಂಸ್ಥೆಗಳ ನಾಯಕರುಗಳು ಮೊದಲಾದವರು ಪ್ಯಾರಿಸ್ ಶೃಂಗ ಸಭೆಯಲ್ಲಿ ಭಾಗವಹಿಸಿದರು.

*****

foot note:
* ಅಮ್ಮ ಕೆಲವೊಮ್ಮೆ ತಮ್ಮನ್ನು ಮೂರನೇಯ ವ್ಯಕ್ತಿಯನ್ನು ಸಂಬೋಧಿಸುವಂತೆ ಸಂಬೋಧಿಸಿಕೊಳ್ಳುತ್ತಾರೆ.
** ಹಿಂದೆ ಅಮ್ಮನ ಬಾಲ್ಯಕಾಲದಲ್ಲಿ ತಮ್ಮ ಮನೆಯಲ್ಲಿದ್ದ ಹಸುಗಳಿಗೆ ಮೇವನ್ನು ಹಾಕುವಸಲುವಾಗಿ ಅಕ್ಕ ಪಕ್ಕದ ಮನೆಗಳಿಲ್ಲಿ ತರಕಾರಿಯ ಸಿಪ್ಪೆಗಳನ್ನು, ಗೆಡ್ಡೆ ಗೆಣಸಿನ ಸಿಪ್ಪೆಗಳನ್ನು, ಅಕ್ಕಿಯನ್ನು ತೊಳೆದ ನೀರನ್ನು ತರಲು ಪುಟ್ಟ ಸುಧಾಮಣಿಯನ್ನು (ಅಮ್ಮನನ್ನು) ಕಳುಹಿಸಲಾಗುತ್ತಿದ್ದ ಸಂದರ್ಭವದು.

ಮಕ್ಕಳೇ, ಮುಂದಿನ ಹತ್ತಿರದ ಹೊರೆಗಲ್ಲಿನಲ್ಲಿ,* ಭಾರವನ್ನು ಇಳಿಸಬಹುದೆಂದು ಎಣಿಸಿದಾಗ ನಮ್ಮ ಭಾರ ಕಮ್ಮಿಯಾದಂತನಿಸುತ್ತದೆ; ಭರವಸೆ ಮೂಡುತ್ತದೆ. ಅದು ಬಹಳ ದೂರ ಎಂದು ಭಾವಿಸಿದಾಗ, ಭಾರ ಹೆಚ್ಚಾದಂತನಿಸುತ್ತದೆ. ಭಗವಂತನು ನಮ್ಮ ಹತ್ತಿರವಿದ್ದಾನೆ ಎಂದು ಭಾವಿಸಿರಿ. ಎಲ್ಲಾ ಭಾರವೂ ಕಮ್ಮಿಯಾಗುತ್ತದೆ. ದೋಣಿಯೋ, ಬಸ್ಸೋ ಹತ್ತಿದ ಮೇಲೆ, ಯಾತಕ್ಕೆ ಇನ್ನೂ ಭಾರ ಹೊರಬೇಕು ? ಅದನ್ನು ಅಲ್ಲೇ ಬಿಡಿರಿ. ಇದೇ ರೀತಿ, ದೇವರಿಗೆ ಎಲ್ಲವನ್ನೂ ಸಮರ್ಪಿಸಿರಿ. ಅವನು ನಮ್ಮನ್ನು ಕಾಪಾಡುವನು.

  • * ಹಿಂದಿನಕಾಲದಲ್ಲಿ ಹಳ್ಳಿಗಳಲ್ಲಿ ಬೆನ್ನು ಹೊರೆ ಹಾಗೂ ತಲೆ ಹೊರೆ ಹೊತ್ತುಕೊಂಡು ಹೋಗುವವರ ದಣಿವಾರಿಸಲೋಸುಗ, ದಾರಿಯಲ್ಲಿ ಅಲ್ಲಲ್ಲಿ ತಮ್ಮ ಹೊರೆ ಇಳಿಸಲು ಅನುಕೂಲವಾಗುವಂತೆ, ಸುಮಾರು ಒಂದೂವರೆ ಅಡಿ ಅಗಲದ ಹಾಗೂ ನಾಲ್ಕಡಿ ಉದ್ದದ ಹಾಸುಗಲ್ಲನ್ನು ಸುಮಾರು ನಾಲ್ಕಡಿ ಎತ್ತರದ ಎರಡು ಸ್ಥಂಭಗಳ ನಡುವೆ ನಿಲ್ಲಿಸುತ್ತಿದ್ದರು. ಇದರ ಮೇಲೆ ಹೊರೆ ಇಳಿಸಿ, ವಿಶ್ರಾಂತಿ ಪಡೆದು, ಪುನಃ ತಮ್ಮ ಹೊರೆಯೊಂದಿಗೆ ಹಳ್ಳಿಗರು ಮುಂದುವರೆಯುತ್ತಿದ್ದರು. ಈಗಲೂ, ಭಾರತದಲ್ಲಿ ಅಲ್ಲೋ ಇಲ್ಲೋ ಕೆಲವು ಕಡೆ ಹಳ್ಳಿ ದಾರಿಗಳಲ್ಲಿ, ಅಪರೂಪಕ್ಕೆಂಬಂತೆ ಇಂತಹ ಕಲ್ಲಿನ ಕಲ್ಲಿನ ಹೊರೆಗಲ್ಲುಗಳನ್ನು ಕಾಣಬಹುದು.

­­­­­­­­­­­­­­­­­­­­­­­­­­­­­­­­­­­____

ಮಕ್ಕಳು ಹೇಳುತ್ತಾರೆ, “ಭಗವಂತನಿಗೆ ನಾವು ಎಷ್ಟೋ ವರ್ಷ ಮೊರೆಯಿಟ್ಟೆವು. ಆದರೂ ದುಃಖವೇ . ಐವತ್ತು ವರ್ಷಗಳಿಂದ, ನಾನು ಭಗವಂತನ ಭಕ್ತನಾಗಿ ಬದುಕುತ್ತಿದ್ದೇನೆ. ಇದುವರೆಗೆ ಯಾವುದೇ ತರದ ಪ್ರಗತಿಯಾಗಿಲ್ಲ.” ಎಂದು. ಅಮ್ಮ ಅದು ನಂಬುವುದಿಲ್ಲ. ಭಗವಂತನಿಗೆ ಮೊರೆಯಿಟ್ಟದ್ದು ಹೇಗೆ ? ಬಯಕೆಗಳು ಹೃದಯದೊಳಗೆ, ಭಗವಂತನು ಹೊರಗೆ. ಭಗವಂತನನ್ನು ಒಂದು ನಿಮಿಷ ಹೃದಯದೊಳಕ್ಕೆ ಇರಿಸಲು ನಿಮಗೆ ಸಾಧ್ಯವಾಗಿಲ್ಲ. ಭಗವಂತನು ಭಕ್ತರ ದಾಸನಾದರೂ, ಅವನನ್ನು ಒಬ್ಬ ಕೂಲಿಯವನನ್ನಾಗಿ ಕಾಣುವುದು ಸರಿಯಲ್ಲ. ಭಗವಂತನನ್ನು ಹೃದಯದಲ್ಲಿರಿಸಿ, ಅದರಲ್ಲಿ ಮಾತ್ರ ಏಕಾಗ್ರತೆ ಇರಿಸಿ ಪ್ರಾರ್ಥಿಸುವವನನ್ನು ಮಾತ್ರವೇ ನಿಜವಾದ ಭಕ್ತ ಎಂದು ಹೇಳಲು ಸಾಧ್ಯ. ಅದು ಹೊರತು, ಇಷ್ಟು ವರ್ಷ ಭಗವಂತನನ್ನು ಕರೆದೆ ಎಂದಷ್ಟಕ್ಕೆ ಭಕ್ತನಾಗುವುದಿಲ್ಲ.
­­­­­­­­­­­­­­­­­­­­­­­­­­­­­­­­­­­____

ನಾವು ಪ್ರತಿಯೊಬ್ಬರೂ ಮನುಷ್ಯನೆಂದು ಬೋರ್ಡು ಹಾಕಿಕೊಂಡು, ಪ್ರಾಣಿಯಂತೆ ಜೀವಿಸುತ್ತಿದ್ದೇವೆ. ಪರಸ್ಪರರಿಗೆ ಅನ್ಯಾಯ ಮಾಡಿಕೊಂಡು ಬಾಳುತ್ತಿದ್ದೇವೆ. ಹೀಗಲ್ಲ ಇರಬೇಕಾದದ್ದು. ನಾವೆಲ್ಲ ಒಂದು ತಾಯಿಯ ಮಕ್ಕಳು; ಅದು ಮಕ್ಕಳು ಮರೆಯ ಬಾರದು.
­­­­­­­­­­­­­­­­­­­­­­­­­­­­­­­­­­­____
ಮಕ್ಕಳೇ, ಸಮಯ ಹಾಳು ಮಾಡದಿರಿ. ಹೋದ ಸಮಯ ಮರಳಿ ಸಿಗುವುದಿಲ್ಲ. ಲಕ್ಷ ರುಪಾಯಿ ನಷ್ಟವಾದರೂ ಅಮ್ಮನಿಗೆ ಬೇಜಾರಿಲ್ಲ. ಆದರೆ ಒಂದು ಸೆಕೆಂಡ್ ಸಮಯ ನಷ್ಟವಾದರೂ, ಅದು ನಷ್ಟವೇ ಅಲ್ಲವೆ ? ಅದು ಸಿಗಲಾರದು. ಹಣ ಮತ್ತೆ ಮಾಡಬಹುದು. ಬೆಲೆಬಾಳುವ ಸಮಯ ನಷ್ಟ ಪಡಿಸದಿರಿ.
­­­­­­­­­­­­­­­­­­­­­­­­­­­­­­­­­­­____
ಮನೆಯ ಚಿಕ್ಕ ಗುಡಿಸಲಿಗೆ ಬೆಂಕಿ ಬಿದ್ದಾಗ ಹೇಗೆ ಬಚಾವಾಗಲು ಪ್ರಯತ್ನ ಪಡುತ್ತೇವೋ, ಹಾಗೆಯೇ, ದೇವರೇ ರಕ್ಷಕನೆಂದು ಅರಿತು ನಿಮ್ಮನ್ನು ಉಳಿಸಿಕೊಳ್ಳಿರಿ ಮಕ್ಕಳೇ. ಚಿನ್ನ ನಮ್ಮಲ್ಲಿಯೇ ಇರುವಾಗ ಇಮಿಟೇಷನ್ ಹಿಂದೆ ಹೋಗದಿರಿ. ಬರಿಯ ನಾಯಿ ಹೇಲಿಗಾಗಿ ಜೀವಿಸದಿರಿ. ಅಮೃತ ನಮ್ಮಲ್ಲಿದೆ, ಅದನ್ನು ಪಾನ ಮಾಡಿರಿ.
­­­­­­­­­­­­­­­­­­­­­­­­­­­­­­­­­­­____